ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ ಯುವತಿಯೊಬ್ಬಳು ಮರುದಿನ ಲಾಡ್ಜ್ ವೊಂದರಲ್ಲಿ ಶ*ವವಾಗಿ ಪತ್ತೆಯಾಗಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಶಾಂತಿಕುಮಾರಿ ಮೃತಪಟ್ಟ ಯುವತಿ.

ಈ ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಆ ಪಾರ್ಟಿ ಎಲ್ಲಿ ನಡೆಯಿತು, ಅಲ್ಲಿಂದ ಆಕೆ ಲಾಡ್ಜ್ ಹೋಗಿದ್ದು ಹೇಗೆ ಪಾರ್ಟಿ ಮುಗಿದ ಮೇಲೆ ಮನೆಗೆ ತೆರಳದೆ ಲಾಡ್ಜ್ಗೆ ಏಕೆ ಹೋದಳು ಎಂಬುದು ಈ ಪ್ರಕರಣದ ಬಹುದೊಡ್ಡ ಪ್ರಶ್ನೆಯಾಗಿದೆ. ಆಕೆ ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಭಾಗವಹಿಸಿದ್ದರು ಆದರೆ, ಅದಾದ ಬಳಿಕ ಮನೆಗೆ ಹೋಗುವ ಬದಲು ಲಾಡ್ಜ್ ಬಳಿ ತೆರಳಲು ಕಾರಣವೇನು ಎಂಬುವುದು ತಿಳಿದು ಬಂದಿಲ್ಲ. ಈ ಸಾ*ವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಕುತೂಹಲಕಾರಿ ಅಂಶಗಳು ಸದ್ಯ ಪೊಲೀಸರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಇನ್ನು ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಕುಟುಂಬಸ್ಥರು ಇದೊಂದು ಪೂರ್ವಯೋಜಿತ ಕೊಲೆಯೆಂದು ಆರೋಪಿಸಿದ್ದಾರೆ. ಸದ್ಯ ಕೆಲವು ಅನುಮಾನಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.



