ಜನ ಮನದ ನಾಡಿ ಮಿಡಿತ

Advertisement

ಚೆನ್ನೈ : ಜೋಸೆಫ್ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ…!

 

ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

 

ಅವರೊಂದಿಗೆ ಪಕ್ಷದ ಒಂಭತ್ತು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಟಿವಿಕೆ ಸರ್ಕಾರ ಅಧಿಕೃತವಾಗಿ ಅಧಿಕಾರಕ್ಕೆ ಬಂದಿದೆ.
ರಾಜಭವನದ ವತಿಯಿಂದ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ವಿಜಯ್ ಹಾಗೂ ನೂತನ ಸಚಿವರಿಗೆ ಹುದ್ದೆ ಮತ್ತು ಗೌಪ್ಯತಾ ಪ್ರಮಾಣವಚನ ಬೋಧಿಸಿದರು. ಸಮಾರಂಭಕ್ಕೆ ರಾಜಕೀಯ ನಾಯಕರು, ಸಿನಿರಂಗದ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು. ನೂತನ ಸಚಿವ ಸಂಪುಟದಲ್ಲಿ ಎನ್. ಆನಂದ್, ಅಧವ ಅರ್ಜುನ, ಡಾ. ಕೆ.ಜಿ. ಅರುಣರಾಜ್, ಕೆ.ಎ. ಸೆಂಗೊಟ್ಟೆಯನ್, ಪಿ. ವೆಂಕಟರಮಣನ್, ಆರ್. ನಿರ್ಮಲ ಕುಮಾರ್, ರಾಜಮೋಹನ್, ಟಿ.ಕೆ. ಪ್ರಭು ಹಾಗೂ ಎಸ್. ಕೀರ್ತನಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಸಚಿವರಿಗೆ ಖಾತೆಗಳ ಹಂಚಿಕೆಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ. ಟಿವಿಕೆ ಸರ್ಕಾರದ ಮೊದಲ ಸಚಿವ ಸಂಪುಟವು ಹಿರಿಯರ ಅನುಭವ, ಯುವಶಕ್ತಿ, ತಂತ್ರಜ್ಞರ ನಿಷ್ಠೆ ಹಾಗೂ ವೃತ್ತಿಪರ ಸಾಮರ್ಥ್ಯದ ಸಮನ್ವಯವನ್ನು ಒಳಗೊಂಡಿದೆ. ಆಡಳಿತದಲ್ಲಿ ಹೊಸ ಚಿಂತನೆಗಳನ್ನು ಪರಿಚಯಿಸುವ ಜೊತೆಗೆ ನಿರಂತರತೆಯನ್ನು ಕಾಪಾಡುವ ಉದ್ದೇಶವನ್ನು ಈ ತಂಡ ಪ್ರತಿಬಿಂಬಿಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ಟಿವಿಕೆ ಸರ್ಕಾರದ ಮೇಲೆ ಜನರಲ್ಲಿ ಭಾರೀ ನಿರೀಕ್ಷೆ ಮೂಡಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಅಟೋ ರಿಕ್ಷಾ ಪಲ್ಟಿ…!

ಮಂಗಳೂರು: ರಾಜ್ಯ ಮಟ್ಟದಲ್ಲಿ ಮಿಂಚಿದ ಚಿಂತನ್ ಶೆಟ್ಟಿ…!

ಚಿಕ್ಕಬಳ್ಳಾಪುರ: ಖಾರದಪುಡಿ ಎರಚಿ ವ್ಯಕ್ತಿಯಿಂದ ಏಳೂವರೆ ಲಕ್ಷ ಹಣ ದೋಚಿಕೆ…!

ಕಾಸರಗೋಡು: ಸಾವಿನಲ್ಲೂ ಒಂದಾದ ಪ್ರೇಮಿಗಳು; ಭಾವಿ ಪತಿಯ ಪಕ್ಕದಲ್ಲೇ ಯುವತಿ ಅಂತ್ಯಕ್ರಿಯೆ…!

ಚೆನ್ನೈ : ಶಾಲೆ-ಧಾರ್ಮಿಕ ಕೇಂದ್ರಗಳ ಬಳಿ ಮದ್ಯದಂಗಡಿ ಬಂದ್…!

ಬಂಟ್ವಾಳ: ಬೋಸರಾಜು-ರಮಾನಾಥ ರೈ ಭೇಟಿ; ನೀರಾವರಿ ಯೋಜನೆಗಳ ಅನುದಾನಕ್ಕೆ ಮನವಿ…!

ಬಂಟ್ವಾಳ: ನೇತ್ರಾವತಿ ನೀರಿನ ಮಟ್ಟ ಕುಸಿತ; ದ.ಕ ಜಿಲ್ಲೆಯಲ್ಲಿ ಆತಂಕ…!

ಮಂಗಳೂರು: ಬಂಟರ ಮಾತೃ ಸಂಘದ ಅಧ್ಯಕ್ಷರಾಗಿ ಅಜಿತ್ ಕುಮಾರ್ ರೈ ಆಯ್ಕೆ…!

ಹೈದರಾಬಾದ್: ತೆಲುಗು ಚಿತ್ರರಂಗದ ಉದಯೋನ್ಮುಖ ನಟ ರಸ್ತೆ ಅಪಘಾತದಲ್ಲಿ ಬಲಿ…!

error: Content is protected !!