ಜನ ಮನದ ನಾಡಿ ಮಿಡಿತ

Advertisement

ಕಾಸರಗೋಡು: ಸಾವಿನಲ್ಲೂ ಒಂದಾದ ಪ್ರೇಮಿಗಳು; ಭಾವಿ ಪತಿಯ ಪಕ್ಕದಲ್ಲೇ ಯುವತಿ ಅಂತ್ಯಕ್ರಿಯೆ…!

 

ಅಪಘಾತದಲ್ಲಿ ಮೃತಪಟ್ಟ ತನ್ನ ಭಾವಿ ಪತಿಯ ಪಕ್ಕದಲ್ಲೇ ತನ್ನನ್ನೂ ಸಮಾಧಿ ಮಾಡಬೇಕೆಂಬ ಯುವತಿಯ ಅಂತಿಮ ಬಯಕೆಯನ್ನು ಕುಟುಂಬಸ್ಥರು ಈಡೇರಿಸಿದ ಹೃದಯವಿದ್ರಾವಕ ಘಟನೆ ಕೇರಳದ ಮಂಜೇಶ್ವರದಲ್ಲಿ ನಡೆದಿದೆ.

ತಮಿಳುನಾಡಿನ ತಿರುನಲ್ವೇಲಿಯಲ್ಲಿ ಮೃತ ಯುವಕ ಮಣಿಯ ಸಮಾಧಿಯ ಪಕ್ಕದಲ್ಲೇ ವಧು ಪ್ರಫುಲ್ಲಾ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದ್ದು, ಸಾವಿನಲ್ಲೂ ಈ ಪ್ರೇಮಿಗಳು ಒಂದಾಗಿದ್ದಾರೆ. ಮಂಜೇಶ್ವರದ ಕಿದೂರು ಕುಂಡಂಗೇರಡುಕ ನಿವಾಸಿ ಜಯಾನಂದ ಅವರ ಪುತ್ರಿ ಪ್ರಫುಲ್ಲಾ ಕಳೆದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮಿಳುನಾಡು ಮೂಲದ ಬ್ಯಾಂಕ್ ಉದ್ಯೋಗಿ ಮಣಿ ಮತ್ತು ಪ್ರಫುಲ್ಲಾ ಅವರ ವಿವಾಹ ನಿಶ್ಚಯ ನಾಲ್ಕು ತಿಂಗಳ ಹಿಂದೆ ನಡೆದಿತ್ತು. ಆದರೆ, ಹತ್ತು ದಿನಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದಾರೆ. ಮಣಿಯ ಸಾವಿನಿಂದ ತೀವ್ರ ಮನನೊಂದು ಖಿನ್ನತೆಗೆ ಒಳಗಾಗಿದ್ದ ಪ್ರಫುಲ್ಲಾ, “ನನ್ನನ್ನು ಮಣಿಯ ಪಕ್ಕದಲ್ಲೇ ಮಣ್ಣು ಮಾಡಬೇಕು” ಎಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮಗಳ ಅಂತಿಮ ಆಸೆಯನ್ನು ಗೌರವಿಸಿದ ತಂದೆ ಜಯಾನಂದ ಹಾಗೂ ಕುಟುಂಬಸ್ಥರು, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪರ್ಣಗೊಂಡ ಬಳಿಕ, ಪ್ರಫುಲ್ಲಾ ಅವರ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ತಮಿಳುನಾಡಿನ ವಳ್ಳಿಯೂರು ಗ್ರಾಮಕ್ಕೆ ಕೊಂಡೊಯ್ಯದರು. ಅಲ್ಲಿ ಧರ್ಮಿಕ ವಿಧಿವಿಧಾನಗಳೊಂದಿಗೆ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲಾ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ನೋವಿನ ಕ್ಷಣಕ್ಕೆ ಸಾಕ್ಷಿಯಾದ ಎರಡೂ ಕುಟುಂಬದವರು ಹಾಗೂ ಗ್ರಾಮಸ್ಥರು ಭಾವುಕರಾದರು. ಪ್ರೀತಿಪಾತ್ರನ ಅಗಲಿಕೆಯನ್ನು ತಾಳಲಾರದೆ ಪ್ರಾಣತ್ಯಾಗ ಮಾಡಿದ ಯುವತಿಯ ಅಂತಿಮ ಆಸೆ ಕೊನೆಗೂ ಈಡೇರಿದ ಘಟನೆ ಸ್ಥಳೀಯರಲ್ಲಿ ಕಣ್ಣೀರನ್ನು ತರಿಸಿತು.

Leave a Reply

Your email address will not be published. Required fields are marked *

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಅಟೋ ರಿಕ್ಷಾ ಪಲ್ಟಿ…!

ಮಂಗಳೂರು: ರಾಜ್ಯ ಮಟ್ಟದಲ್ಲಿ ಮಿಂಚಿದ ಚಿಂತನ್ ಶೆಟ್ಟಿ…!

ಚಿಕ್ಕಬಳ್ಳಾಪುರ: ಖಾರದಪುಡಿ ಎರಚಿ ವ್ಯಕ್ತಿಯಿಂದ ಏಳೂವರೆ ಲಕ್ಷ ಹಣ ದೋಚಿಕೆ…!

ಚೆನ್ನೈ : ಶಾಲೆ-ಧಾರ್ಮಿಕ ಕೇಂದ್ರಗಳ ಬಳಿ ಮದ್ಯದಂಗಡಿ ಬಂದ್…!

ಬಂಟ್ವಾಳ: ಬೋಸರಾಜು-ರಮಾನಾಥ ರೈ ಭೇಟಿ; ನೀರಾವರಿ ಯೋಜನೆಗಳ ಅನುದಾನಕ್ಕೆ ಮನವಿ…!

ಬಂಟ್ವಾಳ: ನೇತ್ರಾವತಿ ನೀರಿನ ಮಟ್ಟ ಕುಸಿತ; ದ.ಕ ಜಿಲ್ಲೆಯಲ್ಲಿ ಆತಂಕ…!

ಮಂಗಳೂರು: ಬಂಟರ ಮಾತೃ ಸಂಘದ ಅಧ್ಯಕ್ಷರಾಗಿ ಅಜಿತ್ ಕುಮಾರ್ ರೈ ಆಯ್ಕೆ…!

ಹೈದರಾಬಾದ್: ತೆಲುಗು ಚಿತ್ರರಂಗದ ಉದಯೋನ್ಮುಖ ನಟ ರಸ್ತೆ ಅಪಘಾತದಲ್ಲಿ ಬಲಿ…!

ಹಾವೇರಿ: ಹಳೆಯ ವೈಷಮ್ಯಕ್ಕೆ ರಕ್ತಪಾತ; ಕಬ್ಬೂರು ಗ್ರಾಮದಲ್ಲಿ ವ್ಯಕ್ತಿ ಹತ್ಯೆ…!

error: Content is protected !!