ಮಂಗಳೂರಿನ ಯೆಯ್ಯಾಡಿ ಗುಂಡಳಿಕೆ ನಿವಾಸಿ 35ರ ಹರೆಯದ ಪ್ರಜ್ವಲ್ ಪೂಜಾರಿ ಅವರು ಹೃ*ದಯಾಘಾತದಿಂದ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ.

ಹಿಂದೂ ಜಾಗರಣ ವೇದಿಕೆಯ ಅನನ್ಯ ಜವಾಬ್ದಾರಿ ನಿರ್ವಹಿಸಿದ್ದ ಅವರು ಶ್ರೀ ಭದ್ರಕಾಳಿ ಚೆಂಡೆ ತಂಡದ ಮಾಲೀಕರಾಗಿದ್ದರು. ಹಲವು ಸಮಾಜ ಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸದ್ಯ ಕಾಣಿಸಿಕೊಂಡ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ವೇಳೆ ನಿಧನರಾದರು. ಮೃ*ತರು ತಂದೆ, ತಾಯಿ, ಅಪಾರ ಬಂಧುಮಿತ್ರನ್ನು ಅಗಲಿದ್ದಾರೆ. ಅವರ ಅಕಾಲಿಕ ನಿಧನ ಸ್ನೇಹಿತ, ಆಪ್ತ ವಲಯಕ್ಕೆ ಆಘಾತ ಉಂಟು ಮಾಡಿದೆ.



