ಬಸ್ನಲ್ಲಿ ಕಳೆದುಕೊಂಡಿದ್ದ 8 ಪವನ್ ಚಿನ್ನಾಭರಣವನ್ನು ಸಂಬ0ಧಪಟ್ಟವರಿಗೆ ಬಸ್ ಕಂಡಕ್ಟರ್ ಮರಳಿಸಿದ ಮಾನವೀಯ ಘಟನೆ ಇತ್ತೀಚೆಗೆ ನಡೆದಿದೆ. ಬಿ.ಸಿ ರೋಡ್-ಇರಾ- ಮುಡಿಪು-ಮಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಎನ್ ಎಸ್ ಬಸ್ ನಲ್ಲಿ ಪ್ರಯಾಣಿಕರೊಬ್ಬರು ತಮ್ಮಲ್ಲಿದ್ದ 8 ಪವನ್ ಚಿನ್ನವನ್ನು ಕಳೆದುಕೊಂಡಿದ್ದರು.

ಪ್ರಯಾಣದ ವೇಳೆ ಬಸ್ ಕಂಡಕ್ಟರ್ ಶಂಭೂರು ನಿವಾಸಿ ಗಣೇಶ್ ಅವರು ಬಸ್ ಪರಿಶೀಲಿಸುವ ವೇಳೆ ಅವರಿಗೆ ಚಿನ್ನಾಭರಣ ಸಿಕ್ಕಿದೆ. ಚಿನ್ನವನ್ನು ಸುರಕ್ಷಿತವಾಗಿ ಇರಿಸಿ ಸಂಬ0ಧಿಸಿದ ಪ್ರಯಾಣಿಕರ ಮಾಹಿತಿಯನ್ನು ಸಂಗ್ರಹಿಸಿದ್ದರು. ಅದನ್ನು ಅದರ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.



