ನವಿಮುಂಬಯಿಯ ಹಿರಿಯ ಹೋಟೇಲ್ ಉದ್ಯಮಿ ಕೊಡುಗೈ ದಾನಿ ಸಹೃದಯಿ ಸಮಾಜ ಸೇವಕರಾದ ತಿಂಬರ ಸಂಜೀವ ಶೆಟ್ಟಿಯವರ ಧರ್ಮಪತ್ನಿ ಶ್ರೀಮತಿ ಜಯಂತಿ ಶೆಟ್ಟಿಯವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ದೈವಾಧೀನರಾಗಿದ್ದಾರೆ.

ಅದೆಷ್ಟೋ ಬಡ ಕುಟುಂಬಗಳ ಮಕ್ಕಳಿಗೆ ಉದ್ಯೋಗದ ಜೊತೆ ಶಿಕ್ಷಣಕ್ಕೂ ಆಸರೆಯಾದ ಮಹಾ ತಾಯಿ ಇಂದು ಭಗವಂತನ ಪಾದ ಕಮಲ ಸೇರಿದ್ದಾರೆ, ಸಮುದ್ರಯಾನದಲ್ಲಿ 5 ದಿನ ಹಸನ್ಮುಖಿಯಾಗಿ ನಕ್ಕು ನಲಿದ ಜಯಂತಿ ಶೆಟ್ಟಿಯವರ ಅಗಲಿಕೆ ಅತ್ಯಂತ ಆಘಾತಕಾರಿ ಸುದ್ದಿಯಾಗಿದೆ.



