ಗಡಿನಾಡು ಕಾಸರಗೋಡಿನ ಹಿರಿಯ ಪ್ರಸಂಗಕರ್ತ ಯಕ್ಷಗಾನ ಅರ್ಥಧಾರಿ, ನಿವೃತ್ತ ಸೇಲ್ ಟೇಕ್ಸ್ ಅಧಿಕಾರಿ ಮಧೂರು ವೆಂಕಟಕೃಷ್ಣ ನಿಧನರಾಗಿದ್ದಾರೆ.
ವಯೋ ಸಹಜ ಅಸೌಖ್ಯ ನಿಮಿತ್ತ ಸೋಮವಾರ ಸಂಜೆ ಮಧೂರಿನ ಸ್ವಗೃಹದಲ್ಲಿ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ಸುಮಿತ್ರಾ ಹಾಗೂ ಇಬ್ಬರು ಪುತ್ರರು ಸಹಿತ ಓರ್ವ ಮಗಳು ಹಾಗೂ ಅಪಾರ ಆಪ್ತ ವಲಯವನ್ನು ಅಗಲಿದ್ದಾರೆ. ಕಾಸರಗೋಡಿನ ಮಾರಾಟ ತೆರಿಗೆ ಇಲಾಖೆ ಅಧಿಕಾರಿಯಾಗಿ ನಿವೃತ್ತರಾದ ಅವರು ಉಳಿಯ ಧನ್ವಂತರಿ ಯಕ್ಷಗಾನ ಸಂಘದ ನೆರಳಲ್ಲಿ ಅರ್ಥಧಾರಿ, ವೇಷಧಾರಿ, ಕಲಾವಿದನಾಗಿ ಮೆರೆದವರು. ತೆಂಕಣ ಯಕ್ಷಗಾನದ ದಂತಕಥೆ ಕೂಡ್ಲು ನಾರಾಯಣ ಬಲ್ಯಾಯರ ಶಿಷ್ಯನಾಗಿ ಯಕ್ಷಗಾನ ಶಿಕ್ಷಣ ಪಡೆದ ಅವರು ಪ್ರಸಂಗಕರ್ತನಾಗಿ ಮೆರೆದವರು. ಅವರ ಸಾಧನೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅವರಿಗೆ ರಾಜ್ಯ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಇನ್ನು ಮಧೂರು ಕ್ಷೇತ್ರಮಹಾತ್ಮೆ ಸಹಿತ ವೈಶಾಲಿನಿ ಪರಿಣಯ, ಧನ್ವಂತರಿ ಮಹಾತ್ಮೆ, ಕ್ಷೇತ್ರ ಮಹಾತ್ಮೆ, ನದಿಯಾಗಿ ಹರಿದ ನಂದಿನಿ, ದುಂಬಿಯಾಗಿ ನೆಗೆದ ಭ್ರಾಮರಿ ಹೀಗೆ ಅನೇಕ ಪ್ರಸಂಗಗಳನ್ನು ರಚಿಸಿದ ಇವರ ಕೃತಿಗಳು ಮೇಳದ ಆಟ, ತಾಳಮದ್ದಳೆ ಕೂಟಗಳಲ್ಲಿ ಜನಪ್ರಿಯವಾಗಿವೆ. ಇವರ ಕಾವ್ಯ ರಚನೆಗಳು ವಿವಿಧ ಭಾಗವತರ ಕಂಠದಲ್ಲಿ ಹಾಡಲ್ಪಟ್ಟು ಜಾಲತಾಣದ ಮೂಲಕ ಸಹಸ್ರಾರು ಕೇಳುಗರನ್ನು ತಲುಪಿದೆ. ಯಕ್ಷಗಾನದಲ್ಲಿ ಮೊದಲು ವಂದಿಸುವ ಮಧೂರು ಕ್ಷೇತ್ರದ ಮುಂಬಾಗಿಲಿನ ಬಳಿ ವಾಸಿಸುವ ಅವರು ಬರೆದ “ಮಧೂರು ಕ್ಷೇತ್ರ ಮಹಾತ್ಮೆ” ಇತ್ತೀಚಿನ ಮಧೂರು ಬ್ರಹ್ಮಕಲಶದ ವೇಳೆ ಪ್ರದರ್ಶನ ಕಂಡಿತ್ತು. ಆ ವೇದಿಕೆಯಲ್ಲಿ ಅವರನ್ನು ಸನ್ಮಾನಿಸಲಿಗಿತ್ತು. ತೆಂಕಣ ಯಕ್ಷಗಾನದ ಅನೂಭವಿಯಾಗಿದ್ದ ಅವರು ಅರ್ಥಗಾರಿಕೆ ಮೂಲಕ ಗತ ಕಾಲದ ಪ್ರಸಿದ್ಧರ ಹಾಡುಗಾರಿಕೆ ಆಲಿಸಿ, ಅರ್ಥವಿಸಿ ಬೆಳೆದವರು. ಅವರ ಪ್ರಸಂಗಗಳು ತೆಂಕಿನ ಎಲ್ಲಾ ಮೇಳಗಳಲ್ಲೂ ಜನಪ್ರಿಯವಾಗಿದೆ.
ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…
ಪೊಲೀಸ್ ಇಲಾಖೆಯ ನಿಜವಾದ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಮತ್ತು ಮಾನವೀಯತೆಯ ಅಪರೂಪದ ಉದಾಹರಣೆಯೊಂದು ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಡೆದ ಅಪಘಾತದ…
ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಬಿದರೆಯ ಮಿಜಾರು ಕೊಪ್ಪದಕುಮೇರಿಯಲ್ಲಿ ಸಂಜೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ…
ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ…
ಶುಕ್ರವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಮಾಣಿ ಬೊಳ್ಳುಕಲ್ಲಿನಿಂದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಹೋಗುವ ಕಮಲ…