ಅಮ್ಮಾ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ‘ಕನಸ ಯುವರಾಣಿ’ ತುಳು ಹಾಗೂ ಕನ್ನಡ ಮ್ಯೂಸಿಕಲ್ ವಿಡಿಯೋ ಸಾಂಗ್ ಆಗಸ್ಟ್ 19ರಂದು ಮಂಗಳೂರಿನ ಭಾರತ್ ಸಿನಿಮಾಸ್ನಲ್ಲಿ ಬಿಡುಗಡೆಯಾಗಲಿದೆ.

ಅಕ್ಷಯ್ ವಾಮಂಜೂರು ಹಾಗೂ ಧನ್ಯಾ ಚಿನ್ನು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಹಾಡಿಗೆ ಅಕ್ಷಯ್ ವಾಮಂಜೂರು ಕಥೆ ಮತ್ತು ಚಿತ್ರಕಥೆ ಬರೆದಿದ್ದು, ಪ್ರಥಮ್ ಸಾಲಿಯಾನ್ ನಿರ್ದೇಶನ ಮಾಡಿದ್ದಾರೆ.
ಸಂಗೀತ ನಿರ್ಮಾಪಕ ಹಾಗೂ ಗಾಯಕರಾಗಿ ನಿಶ್ಚಿತ್ ರಾಜ್, ಸಾಹಿತ್ಯ ಮತ್ತು ಕಲಾ ವಿಭಾಗದಲ್ಲಿ ರತೀಶ್ ರತ್ನಮಾಲ, ಛಾಯಾಗ್ರಹಣವನ್ನು ಸನತ್ ಶೆಟ್ಟಿ ಹಾಗೂ ಸಂಕಲನವನ್ನು ಯಶ್ವಿನ್ ಕೆ. ಶೆಟ್ಟಿಗಾರ್ ನಿರ್ವಹಿಸಿದ್ದಾರೆ.
ಈಗಾಗಲೇ ‘ಕನಸ ಯುವರಾಣಿ’ಯ ಟೀಸರ್ ಅಮ್ಮಾ ಕ್ರಿಯೇಷನ್ ಮಂಗಳೂರು ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ವಿಭಿನ್ನ ಕಲಾವಿದರ ಬಳಗದೊಂದಿಗೆ ಮೂಡಿಬಂದಿರುವ ಈ ಮ್ಯೂಸಿಕಲ್ ವಿಡಿಯೋ ಸಾಂಗ್ ಆಗಸ್ಟ್ 19ರಂದು ಪ್ರೇಕ್ಷಕರ ಮುಂದೆ ಬರಲಿದ್ದು, ಹೊಸ ಪ್ರಯತ್ನಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.



