ಶ್ರೀ ವಿಠೋಬ ಭಜನಾ ಮಂದಿರ ಪಂಜ ಕೊಯಿಕುಡೆ ಇದರ 77ನೇ ವರ್ಷದ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಸದಾನಂದ ಎಂ ಶೆಟ್ಟಿ ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಸತೀಶ್ ಎಂ ಶೆಟ್ಟಿ ಬೈಲಗುತ್ತು ಅಲಂಕರಿಸಿದರು. ಮುಖ್ಯ ಅತಿಥಿಯಾಗಿ ಸುರೇಶ್ ಭಟ್ ಪಂಜ ಮಹಾ ಗಣಪತಿ ಮಂದಿರ, ವಿಶ್ವನಾಥ ಶೆಟ್ಟಿ ಪಂಜದ ಗುತ್ತು ,ಕೆಮ್ರಾಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುರೇಶ್ ಪಂಜ, ಸೀತಾರಾಮ ಅಮಿನ್ ಚಾಮುಂಡೇಶ್ವರಿ ಸನ್ನಿಧಿ ಪಂಜ, ನವೀನ್ ಕುಮಾರ್ ಶೆಟ್ಟಿ ಅಧ್ಯಕ್ಷರು ಶನೇಶ್ವರ ಮಂಡಳಿ ಪಂಜ ಕೊಯಿಕುಡೆ, ನವೀನ್ ಶೆಟ್ಟಿ ನಲ್ಯ ಗುತ್ತು ಅಧ್ಯಕ್ಷರು ಹಾಲು ಉತ್ಪಾದಕರ ಸಂಘ ಪಂಜ ಕೊಯಿಕುಡೆ, ಪಂಜ ಶಾಲಾ ಮುಖ್ಯ ಶಿಕ್ಷಕಿಯಾದ ಐರಿನ್ ಡಿಸೋಜ, ನವಜೋತಿ ಮಹಿಳಾ ಮಂಡಲದ ಅಧ್ಯಕ್ಷರಾದ ಅಮಿತಾ ದೇವಾಡಿಗ, ಕೆಮ್ರಾಲ್ ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಸಾಲಿಯಾನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿವಪ್ಪ ಶೆಟ್ಟಿ ಪಡುಮನೆ ಮೊಗಪಾಡಿ ಸಾಹಿತಿ ಲೇಖಕ ಇವರನ್ನು ಸನ್ಮಾನಿಸಲಾಯಿತು. ಸತೀಶ್ ಎಂ ಶೆಟ್ಟಿ ಬೈಲಗುತ್ತು ಕಾರ್ಯಕ್ರಮ ನಿರೂಪಿಸಿದರು. ಪದ್ಮನಾಭ ಪೂಜಾರಿ ಸ್ವಾಗತಿಸಿದರು. ಭರತ್ ಶೆಟ್ಟಿ ಪಂಜ ಧನ್ಯವಾದ ಅರ್ಪಿಸಿದರು.




