ಜನ ಮನದ ನಾಡಿ ಮಿಡಿತ

Advertisement

” ಬೊಗ್ಗಿ” ಸಾವಿಗೆ ಕಂಬನಿ ಮಿಡಿದ ಬಂಟ್ವಾಳ ಪೊಲೀಸರು

ಬಂಟ್ವಾಳ: ಪೋಲೀಸ್ ಠಾಣೆಯ ಕಾವಲು ಕಾಯುತ್ತಿದ್ದ ” ಬೊಗ್ಗಿ” ಅಪಘಾತಕ್ಕೆ ಒಳಗಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆಗೆ ಠಾಣೆಯ ಪೋಲೀಸರು ಕಣ್ಣೀರು ಹಾಕಿದ ಅಪರೂಪದ ಸನ್ನಿವೇಶ ನಡೆಯಿತು.
ಇದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ನಡೆದ ಘಟನೆ.
ಬಂಟ್ವಾಳ ಪೋಲೀಸ್ ಠಾಣೆಯಲ್ಲಿ ಸುಮಾರು 7 ವರ್ಷಗಿಂತಲೂ ಹೆಚ್ಚಿನ ಅವಧಿಯಿಂದ ಪೋಲೀಸ್ ಠಾಣೆಯ ಸದಸ್ಯರಾಗಿದ್ದು ರಾತ್ರಿ ಪಾಳಿಯಲ್ಲಿ ಕಾವಲುಗಾರನಂತೆ ಶಿಸ್ತಿನ ಕೆಲಸ ಮಾಡುತ್ತಿದ್ದ ಹೆಣ್ಣು ನಾಯಿ ಕಾರು ಅಪಘಾತದಲ್ಲಿ ಶನಿವಾರ ರಾತ್ರಿ ಸುಮಾರು 9 ಗಂಟೆ ವೇಳೆ ಠಾಣೆಯ ಅವರಣದಲ್ಲಿಯೇ ಸಾವನ್ನಪ್ಪಿದೆ.


ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಠಾಣೆ ಕಾರಿನಲ್ಲಿ ಬಂದಿದ್ದ ವ್ಯಕ್ತಿ ತನ್ನ ಕೆಲಸ ಮುಗಿಸಿ ವಾಪಸು ಹೋಗುವ ವೇಳೆ ಕಾರನ್ನು ರಿವರ್ಸ್ ತೆಗೆಯುವಾಗ ಅಲ್ಲೇ ಮಲಗಿದ್ದ ನಾಯಿಯ ಮೇಲೆ ಆತನಿಗೆ ಗೊತ್ತಿಲ್ಲದೆ ಕಾರು ಹರಿದಿದೆ. ಗಂಭೀರವಾಗಿ ಗಾಯಗೊಂಡ ನಾಯಿ ಸ್ಥಳದಲ್ಲಿ ಯೇ ಸಾವನ್ನಪ್ಪಿದೆ.
ಘಟನೆಯನ್ನು ಕಂಡ ನಗರ ಠಾಣೆಯ ಪೋಲೀಸರು ಕಣ್ಣೀರು ಹಾಕಿದರು. ಬಳಿಕ ನಾಯಿಯನ್ನು ವಿಶೇಷ ಗೌರವ ನೀಡಿ ಮಣ್ಣು ಮಾಡಲಾಯಿತು.

ನಾಯಿ ಸತ್ತಂತೆ ಒಂದು ಮಾತಿದೆ ಸಾಮಾನ್ಯ ನಾಯಿಗಳು ಸತ್ತಾಗ ದೊಡ್ಡ ವಿಚಾರವಾಗುವುದಿಲ್ಲ. ಆದರೆ ನಗರ ಪೋಲೀಸ್ ಠಾಣೆಯ ನಾಯಿ ಸತ್ತಾಗ ಪೋಲೀಸರ ಕಣ್ಣು ತೇವವಾಯಿತು. ಹೂ ಮಾಲೆಯೊಂದಿಗೆ ನಾಯಿಯ ಅಂತ್ಯ ಸಂಸ್ಕಾರ ಮಾಡಿದರು. ಅನೇಕ ವರ್ಷಗಳಿಂದ ಈ ನಾಯಿ ಠಾಣೆಯ ಮೆಟ್ಟಿಲ ಮೇಲೆ ಮಲಗುತ್ತಿತ್ತು.
ಠಾಣೆಯೇ ಇದರ ಮನೆಯಾಗಿತ್ತು. ಬಹಳ ಬುದ್ದಿಯ ನಾಯಿಯಾಗಿ ಎಲ್ಲರ ಅಚ್ಚುಮೆಚ್ಚಿನ ಬೊಗ್ಗಿ ಎಂದೇ ಪ್ರಸಿದ್ಷಿಯಾಗಿತ್ತು. ಪೋಲೀಸರಲ್ಲದೆ ಹೊರಗಿನವರು ಯಾರೇ ಅಪರಿಚಿತ ವ್ಯಕ್ತಿ ಗಳು ಬಂದರು ಬೊಗಳುವ ಈ ಬೊಗ್ಗಿ ಇನ್ನಿಲ್ಲ ಎಂದು ಪೋಲೀಸರು ಬೇಸರ ವ್ಯಕ್ತಪಡಿಸುತ್ತಾರೆ.


ಯಾರಿಗೂ ಈ ವರೆಗೆ ಕಚ್ಚಿಲ್ಲ, ಆದರೆ ಅಪರಿಚಿತರು ಯಾರು ಬಂದರೂ ಬಂದಿದ್ದಾರೆ ನೋಡಿ ಬೊಗಳುವ ಮೂಲಕ ಪೋಲೀಸರನ್ನು ಎಚ್ಚರಿಸುವ ಕೆಲಸ ಮಾಡುತ್ತಿತ್ತು.ಒಂದು ದಿನವೂ ಠಾಣೆಯನ್ನು ಬಿಟ್ಟು ಹೊರಗೆ ಹೋಗಿದ್ದಿಲ್ಲ ಎಂದು ಹೇಳುತ್ತಾರೆ. ನಾಯಿಯನ್ನು ಹೂತು ಹಾಕಿದ ಸ್ಥಳದಲ್ಲಿ ನಾಯಿಯ ನೆನಪಿಗೋಸ್ಕರ ಯಾವುದಾದರೂ ಪ್ರಾಣಿಗಳಿಗೆ ಆಹಾರ ನೀಡುವ ಹಣ್ಣಿನ ಮರವೊಂದನ್ನು ನೆಡವ ಸಂಕಲ್ಪವನ್ನು ಪೋಲೀಸರು ಮಾಡಿದ್ದಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪ*ಘಾತದಲ್ಲಿ ಯುವಕ ಸಾ*ವು….!

ಬಂಟ್ವಾಳ: ಅಮ್ಮುಂಜೆ ವೃದ್ಧೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ…!

ನವದೆಹಲಿ: ಚಿನ್ನದ ಬೆಲೆ ಇಳಿಯುತ್ತಾ? ವಿಶ್ವ ಚಿನ್ನ ಮಂಡಳಿಯ ಭವಿಷ್ಯ…!

error: Content is protected !!