ಹುಲಿ ವೇಷವೆಂದರೆ ಬರಿ ಕುಣಿತವಲ್ಲ, ಅದು ಕರಾವಳಿಗರ ಭಾವನೆ ಹಾಗೂ ಆರಾಧನೆಯ ರೂಪವಾಗಿದೆ.
ಕಡಲನಗರಿಯಲ್ಲಿ ನಡೆಯುವಂತಹ ಪ್ರತಿಯೊಂದು ಹಿಂದೂ ಸನಾತನ ಧರ್ಮದ ಆಚರಣೆಗಳಲ್ಲಿ ಹುಲಿ ವೇಷ ಮಿಂಚುತ್ತದೆ. ಕೆಲವರು ಹರಕೆ ರೂಪದಲ್ಲಿ ಹುಲಿ ವೇಷವನ್ನು ಧಾರಣೆ ಮಾಡುವ ವಾಡಿಕೆ ಮಂಗಳೂರು, ಉಡುಪಿಗಳಲ್ಲಿ ಹೆಚ್ಚಾಗಿವೆ. ಅಂತೆಯೇ ಈ ವರ್ಷದ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿಯ ನಿಟ್ಟೂರಿನಲ್ಲಿ ಹುಲಿವೇಷ ಸ್ಪರ್ಧೆ ನಡೆದಿದ್ದು, ಈ ಹುಲಿವೇಷ ತೊಟ್ಟು ಕುಣಿಯುತಿದ್ದ ವೇಳೆ ವೇಷಧಾರಿ ಮೇಲೆ ಆವೇಶ ಬಂದ ಅಚ್ಚರಿ ಘಟನೆ ನಡೆದಿದೆ.
ಮೈಮೇಲೆ ಆವೇಶ ಬಂದು ವೇದಿಕೆಗೆ ಹಾಕಿದ್ದ ರೆಡ್ ಕಾರ್ಪೆಟ್ ನ್ನ ಬಾಯಲ್ಲಿ ಕಚ್ಚಿ ಹರಿದು ಹಾಕಿದ್ದಾರೆ. ಈ ಸಂದರ್ಭ ಹುಲಿವೇಷಧಾರಿಯನ್ನ ನಿಯಂತ್ರಣಕ್ಕೆ ತರುವಲ್ಲಿ ಸಹ ವೇಷಧಾರಿಗಳು ಹರಸಾಹಸ ಪಟ್ಟಿದ್ದು, ಈ ವೇಳೆ ಸಹವೇಷಧಾರಿಗೂ ಕಚ್ಚಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ ಹರಕೆ ಹೊತ್ತು ವೇಷಹಾಕುವವರ ಮೈಮೇಲೆ ಆವೇಶ ಬರುತ್ತದೆ ಎಂಬ ಪ್ರತೀತಿ ಕರಾವಳಿಗರಲ್ಲಿದೆ. ಆವೇಶ ಬಂದಲ್ಲಿ ವೇಷಧಾರಿಯನ್ನ ನಿಯಂತ್ರಣಕ್ಕೆ ತರದೇ ಹೋದ ಪಕ್ಷದಲ್ಲಿ ಕಾಡಿಗೆ ಓಡಿಹೊಗಬಹುದು, ಇನ್ನೊಂದು ಜೀವಿಯ ಮೇಲೆ ಆಕ್ರಮಣ ಮಾಡಬಹುದು ಎಂಬ ನಂಬಿಕೆ ತುಳುವರದ್ದಾಗಿದೆ.
ಇನ್ನೂ ಉಡುಪಿಯಲ್ಲಿ ನಡೆದ ಘಟನೆ ಎಲ್ಲರನ್ನ ಆಶ್ಚರ್ಯ ಚಕಿತರನ್ನಾಗಿ ಮಾಡಿಸಿದಂತು ಸತ್ಯದ ಮಾತಾಗಿದೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…