ಜನ ಮನದ ನಾಡಿ ಮಿಡಿತ

Advertisement

ಹಳೆಯಂಗಡಿ: ಶ್ರೀ ಕ್ಷೇತ್ರ ಕಲ್ಲಾಪು ನಲ್ಲಿ ನಡೆದ “ಪಾಂಚಜನ್ಯ” ಯಕ್ಷಗಾನ ಬಯಲಾಟ

ಮುಲ್ಕಿ : ಶ್ರೀ ವೀರಭದ್ರ ಮಹಮ್ಮಾಯಿ ವಾಚನಾಲಯ ಮತ್ತು ಯುವಕ ಮಂಡಲ ಹಾಗೂ ಮಹಿಳಾ ವೇದಿಕೆ ಕಲ್ಲಾಪು ಹಳೆಯಂಗಡಿ ಇದರ ವತಿಯಿಂದ ಮಹಾ ನವಮಿಯಂದು 25 ವರ್ಷ ಪೂರೈಸಿ ಬೆಳ್ಳಿಹಬ್ಬದ ಸಡಗರದಲ್ಲಿ “ಪಾಂಚಜನ್ಯ” ಎಂಬ ಯಕ್ಷಗಾನ ಬಯಲಾಟ ಶ್ರೀ ಕ್ಷೇತ್ರ ಕಲ್ಲಾಪು ನಲ್ಲಿ ನಡೆಯಿತು. ಈ ಒಂದು ಬೆಳ್ಳಿಹಬ್ಬದ ಸಂಭ್ರಮದಲ್ಲಿ ಯಕ್ಷಗಾನ ನಿರ್ದೇಶಕರಾದ ಕಿರಣ್ ಕುಮಾರ್ ಪಡುಪಣಂಬೂರು, ಭಾಗವತರಾದ ಜಯ ದೇವಾಡಿಗ, ಶ್ರೀನಿವಾಸ, ಚಂದ್ರಕಾಂತ್, ಚೆಂಡೆಯಲ್ಲಿ ಭವಿಷ್, ವಿಘ್ನೇಶ್, ಯಕ್ಷನಾಟ್ಯ ಗುರುಗಳಾದ ಪುಷ್ಪರಾಜ್, ಪದ್ಮನಾಭ, ಶ್ರೀನಿವಾಸ ಇವರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಗುರಿಕಾರರಾದ ರಾಮ ಗುರಿಕಾರರು, ರತ್ನಾಕರ್ ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರರು, ಅಪ್ಪು ಗುರಿಕಾರರು, ಲಕ್ಷ್ಮಣ ಗುರಿಕಾರರು, ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರಾದ ಲೋಲಾಧರ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಅಂಜನ್ ಕುಮಾರ್ ಕಲ್ಲಾಪು ನೆರವೇರಿಸಿದರು. ಸನ್ಮಾನ ಪತ್ರವನ್ನು ಮಹೇಶ್ ಕಲ್ಲಾಪು ವಾಚಿಸಿದರು. ಯುವಕ ಮಂಡಲದ ಅಧ್ಯಕ್ಷರಾದ ನವೀನ್ ಶೆಟ್ಟಿಗಾರ್ ವಂದಿಸಿದರು.

Leave a Reply

Your email address will not be published. Required fields are marked *

ಟೆಹ್ರಾನ್: ಖಮೇನಿ ಭೇಟಿಯಲ್ಲೇ ಹೊಸ ರಹಸ್ಯ! ‘ನೀವೇ ಖಮೇನಿಯೇ?’ ಎಂದು ಪ್ರಶ್ನಿಸಿದ ಇರಾನ್ ಅಧ್ಯಕ್ಷ…!

ಬ್ಯಾಂಕಾಕ್: ಥೈಲ್ಯಾಂಡ್ ಶಾಲೆಯಲ್ಲಿ ಗುಂಡಿನ ದಾಳಿ: ಶಿಕ್ಷಕ ಸಾವು, 15 ಮಂದಿಗೆ ಗಾಯ…!

ಬಂಟ್ವಾಳ: ಆಳ್ವಾಸ್ ಪ್ರಗತಿ-2026 ಉದ್ಯೋಗ ಮೇಳಕ್ಕೆ ಬಂಟ್ವಾಳದಿಂದ ಉಚಿತ ಬಸ್…!

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರು ಅಪಘಾತ: ಒಂದೇ ಕುಟುಂಬದ ಆರು ಮಂದಿಗೆ ಗಾಯ…!

ಬಂಟ್ವಾಳ: ಬಿ.ಸಿ.ರೋಡ್ ಎನ್.ಜಿ. ಸರ್ಕಲ್‌ನಲ್ಲಿ ಭೀಕರ ಅಪಘಾತ: ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತ್ಯು…!

ಮಂಗಳೂರು: ನ್ಯುಮೋನಿಯಾಗೆ 6ನೇ ತರಗತಿ ವಿದ್ಯಾರ್ಥಿನಿ ಬಲಿ

ಬಂಟ್ವಾಳ: ಬಿಸಿರೋಡು–ಅಡ್ಡಹೊಳೆ ಚತುಷ್ಪಥ ಕಾಮಗಾರಿ ನಿಂತಿಲ್ಲ: ಕೆಎನ್‌ಆರ್‌ಸಿಎಲ್ ಸ್ಪಷ್ಟನೆ

ವಾಷಿಂಗ್ಟನ್: ಟ್ರಂಪ್ ಸುಂಕಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕಂಪನಿಗಳಿಗೆ ಬಿಲಿಯನ್‌ಗಟ್ಟಲೆ ಮರುಪಾವತಿ..!

ಟೆಹ್ರಾನ್: ಮೊಜ್ತಬಾ ಖಮೇನಿ ಸಂಪರ್ಕಿಸುವುದು ಕಷ್ಟ; ಇರಾನ್ ಅಧ್ಯಕ್ಷರ ಬಹಿರಂಗ ಹೇಳಿಕೆ…!

error: Content is protected !!