ಬದಿಯಡ್ಕ: ಕ್ಯಾನ್ಸರ್ ರೋಗ ಬಾಧಿತನಾಗಿ ಚಿಕಿತ್ಸೆ ಪಡೆಯುತ್ತಿದ್ದ ಮುಂಡಿತ್ತಡ್ಕ ಶಾಲೆಯ ಅಧ್ಯಾಪಕ ಪ್ರಶಾಂತ್ ರೈ (41) ನಿಧನರಾದರು. ಇಂದು (ಶನಿವಾರ) ಬೆಳಗ್ಗೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಇವರು ಬದಿಯಡ್ಕ ಪಿಲಾ೦ಕಟ್ಟೆ ನಿವಾಸಿಯಾಗಿದ್ದಾರೆ.

ಅಧ್ಯಾಪಕರಾಗಿದ್ದ ವೇಳೆ ಅವರಿಗೆ ಕ್ಯಾನ್ಸರ್ ಬಾಧಿಸಿದ್ದು ಚಿಕಿತ್ಸೆ ನಡೆಸಲಾಗಿತ್ತು. ಈ ಮಧ್ಯೆ ಇವರ ಚಿಕಿತ್ಸೆಗಾಗಿ ಸಮಿತಿ ರಚಿಸಿ ಹಣ ಸಂಗ್ರಹವೂ ಮಾಡಲಾಗಿತ್ತು. ಆಟೋ ರಿಕ್ಷಾ ಚಾಲಕರು, ಬಸ್ಸು ಸಿಬಂದಿಗಳು ಅವರಿಗಾಗಿ ಕಾರುಣ್ಯ ಯಾತ್ರೆ ನಡೆಸಿ ಹಣ ಸಂಗ್ರಹ ಮಾಡಿದ್ದರು. ಈ ಮಧ್ಯೆ ಅವರು ಕೊನೆಯುಸಿರೆಳೆದಿರುವುದು ಅಭಿಮಾನಿ ಬಳಗಕ್ಕೆ ಶಾಕ್ ಆಗಿದೆ. ಮೃತರು ತಂದೆ ರಾಮ ಮಾಸ್ತರ್, ತಾಯಿ ಸರಳ, ಪತ್ನಿ ದಿವ್ಯ, ಮಕ್ಕಳಾದ ಮನಸ್ತಿ ಅನುಶ್ರೀ, ಸಹೋದರ ಗುರುಪ್ರಸಾದ್ ರೈ (ಶಿಕ್ಷಕರು,ಪಳ್ಳತ್ತಡ್ಕ ಶಾಲೆ) ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.



