ಜನ ಮನದ ನಾಡಿ ಮಿಡಿತ

Advertisement

ಮೂಡಬಿದ್ರಿ : ಸ್ಥಳೀಯರ ಸಕಾಲಿಕ ನೆರವಿನಿಂದ ಬದುಕಿ ಬಂದ ಪ್ರವಾಸಿ ತಂಡ

ಮಳೆ ಶುರುವಾಯಿತೆಂದರೆ ಕರಾವಳಿಯಲ್ಲಿ ಜಲಪಾತಗಳು ಮೈದೋರುತ್ತವೆ. ಇವು ದೂರದಿಂದ ನೋಡಲು ರೋಚಕ ಮತ್ತು ಸುಂದರ. ದ.ಕ ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಯಲ್ಲಿ ಜಲಪಾತಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಬಂದವರು ಜಲಪಾತದೆದುರು ತಮ್ಮ ಕೌಶಲ್ಯ ಪ್ರದರ್ಶನಕ್ಕೆ ಮುಂದಾಗಿ ಅಪಾಯಕ್ಕೆ ಸಿಲುಕುತ್ತಾರೆ. ಇಂತಹ ಘಟನೆ ಮೂಡಬಿದ್ರೆ ಸಮೀಪದ ಎರುಗುಂಡಿ ಜಲಪಾತದ ಸಮೀಪ ನಡೆದಿದೆ. ಸ್ಥಳೀಯರು ಹಗ್ಗ ಬಳಸಿ ಜಲಪಾತದ ನಡುವೆ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ.

ಮೂಡುಬಿದ್ರಿ ಪಾಲಡ್ಕ ಎರುಗುಂಡಿ ಫಾಲ್ಸ್ ಮಳೆಗಾಲದಲ್ಲಿ ಅಬ್ಬರಿಸುವ ಜಲಪಾತ. ಬಂಡೆಗಳ ನಡುವೆ ಧುಮ್ಮಿಕ್ಕುವ ಜಲಪಾತವನ್ನು ನೋಡಲು ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಬರುತ್ತಾರೆ. ಕಾಡಿನ ನಡುವೆ ಇರುವುದರಿಂದ ಜಲಪಾತದವರೆಗೆ ರಸ್ತೆ ಇಲ್ಲ. ನಡೆದುಕೊಂಡು ಸಾಗಬೇಕು. ಇದರಿಂದಾಗಿ ಇಲ್ಲಿ ಪೊಲೀಸರ ನಿಗಾ ಕಡಿಮೆ. ಬರುವ ಪ್ರವಾಸಿಗರು ಮೋಜಿನಾಟದಲ್ಲಿ ಬಂಡೆಗಳ ಮೇಲೆ ಸರ್ಕಸ್ ಮಾಡಲು ತೊಡಗುತ್ತಾರೆ. ಮಳೆ ಬಂದರೆ ಜಲಪಾತಕ್ಕೆ ಹರಿದು ಬರುವ ನೀರಿನ ಪ್ರಮಾಣ ಏಕಾಏಕಿ ಏರುತ್ತದೆ. ಮೋಜಿನಾಟದಲ್ಲಿ ತೊಡಗಿದ್ದವರು ಪ್ರಾಣಾಪಾಯಕ್ಕೆ ಸಿಲುಕುತ್ತಾರೆ. ಇಂತಹ ಘಟನೆ ನಡೆದಾಗ ಸ್ಥಳೀಯರು ಹಗ್ಗ ಕಟ್ಟಿ ಜಲಪಾತದ ನಡುವೆ ಸಿಲುಕಿದವರನ್ನು ರಕ್ಷಿಸಿದ್ದಾರೆ. ಅಪಾಯ ಲೆಕ್ಕಿಸದೆ ಜಲಪಾತದಲ್ಲಿ ನೀರಾಟವಾಡಲು ಹೋಗಿದ್ದ ಪ್ರವಾಸಿಗರು ಅಪಾಯಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿರುವ ಘಟನೆಗಳು ಈ ಹಿಂದೆ ನಡೆದಿವೆ. ಈ ಬಾರಿ ಪ್ರವಾಸಿ ತಂಡದವರ ಅದೃಷ್ಟ ನೆಟ್ಟಗಿತ್ತು. ಸ್ಥಳೀಯರ ಸಕಾಲಿಕ ನೆರವಿನಿಂದ ಬದುಕಿ ಬಂದಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!