ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ತೋಕೂರು, ಹಳೆಯಂಗಡಿ
ಇದರ ಆಶ್ರಯದಲ್ಲಿ ದಿನಾಂಕ 14.04.2024 ರವಿವಾರ ಸಮಯ ಬೆಳಿಗ್ಗೆ 9.00 ಕ್ಕೆ ಸರಿಯಾಗಿ ಉಚಿತ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ನೆರವೇರಿತು.

▶️ ಶಿಬಿರದ ಪುಟಾಣಿ ಮಕ್ಕಳಾದ ಕುಮಾರಿ ದೀಕ್ಷಾ ಮತ್ತು ಕುಮಾರಿ ದೀಪಿಕಾ ಪ್ರಾರ್ಥನೆ ಹಾಡಿದರು.
▶️ ಶಿಕ್ಷಕರು ಹಾಗೂ ಕೆರೆಕಾಡು ವಿನಾಯಕ ಯಕ್ಷಗಾನ ಮೇಳದ ಶ್ರೀ ಅಜಿತ್ ಕೆರೆಕಾಡು ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
▶️ವೇದಿಕೆಯಲ್ಲಿ ಸ್ಪೋರ್ಟ್ಸ್ ಕ್ಲಬ್ ನ ಗೌರವ ಅಧ್ಯಕ್ಷರು ಶ್ರೀ ಪ್ರಶಾಂತ್ ಕುಮಾರ್ ಬೇಕಲ್, ಅಧ್ಯಕ್ಷರು ಶ್ರೀ ಜಗದೀಶ್ ಕುಲಾಲ್, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಯಶೋದಾ ದೇವಾಡಿಗ ಉಪಸ್ಥಿತರಿದ್ದರು.
▶️ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿದ ಶ್ರೀ ಅಜಿತ್ ಕೆರೆಕಾಡು ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಎಲ್ಲೆಲ್ಲಿಯೂ ಬಹಳಷ್ಟು ಶುಲ್ಕ ನಿಗದಿಪಡಿಸಿ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಆದರೆ ಶ್ರೀ ಸುಬ್ರಹ್ಮಣ್ಯ ಸ್ಪೋರ್ಟ್ಸ್ ಕ್ಲಬ್ ಉಚಿತವಾಗಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ಆಯೋಜಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು. ಅಲ್ಲದೆ ಮಕ್ಕಳು ರಜಾದಿನಗಳಲ್ಲಿ ಸಮಯ ವ್ಯರ್ಥ ಮಾಡದೆ ಬೇಸಿಗೆ ಶಿಬಿರದ ಮೂಲಕ ಉಪಯುಕ್ತ ರೀತಿಯಲ್ಲಿ ಸಮಯದ ಸದುಪಯೋಗ ಮಾಡಿಕೊಳ್ಳಬೇಕಾಗಿ ಕರೆ ನೀಡಿದರು.

▶️ಸಭಾ ಕಾರ್ಯಕ್ರಮದ ನಂತರ ಯಕ್ಷ ನಾಟ್ಯ ಕಾರ್ಯಾಗಾರದಲ್ಲಿ ಶ್ರೀ ಅಜಿತ್ ಕೆರೆಕಾಡು ಅವರು ಶಿಬಿರಾರ್ಥಿಗಳಿಗೆ ಯಕ್ಷಗಾನದ ಬಗ್ಗೆ ಕಿರು ಮಾಹಿತಿ ನೀಡಿ, ವಿವಿಧ ಮನೋರಂಜನಾ ಆಟಗಳೊಂದಿಗೆ ಯಕ್ಷಗಾನ ನೃತ್ಯದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಅಲ್ಲದೆ ಹಲವು ಆಟೋಟಗಳನ್ನು ನಡೆಸಿಕೊಟ್ಟರು.
▶️ಸ್ಪೋರ್ಟ್ಸ್ ಕ್ಲಬ್ ನ ಕಾರ್ಯಾಧ್ಯಕ್ಷರಾದ ಶ್ರೀ ಸಂತೋಷ್ ದೇವಾಡಿಗ ವಂದಿಸಿದರು.
▶️ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಗೀತಾ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.
▶️ನಿಕಟಪೂರ್ವ ಮಹಿಳಾ ಜೊತೆ ಕಾರ್ಯದರ್ಶಿ ಶ್ರೀಮತಿ ನೀಮಾ ಸನಿಲ್ ಅವರ ಸಹಕಾರದಲ್ಲಿ ಮಕ್ಕಳಿಗೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.



