ಅತ್ತೂರು ಪರ್ಪಲೆಗಿರಿ ಶ್ರೀ ಕಲ್ಕುಡ ದೈವಸ್ಥಾನ ಟ್ರಸ್ಟ್ ವತಿಯಿಂದ ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ ಆಶ್ರಯದಲ್ಲಿ ಕಲ್ಕುಡ ಕಲ್ಲುರ್ಟಿ-ತೂಕತ್ತರಿ ಧರ್ಮದೈವಗಳ ಶಿಲಾಮಯ ಗರ್ಭಗೃಹ ಸಮರ್ಪಣೆ ಮತ್ತು ದೈವ ಬಿಂಬ ಪ್ರತಿಷ್ಠೆ ಸಾನಿಧ್ಯ ಕಲಶೋತ್ಸವ ಹಾಗೂ ವೈಭವದ ಸಿರಿ ಸಿಂಗಾರ ನೇಮೋತ್ಸವ ವಿಜೃಂಭಣೆಯಿ0ದ ನೆರವೇರಿದೆ.

ಕ್ಷೇತ್ರಕ್ಕೆ ಕೊಡುಗೈದಾನಿ, ದೈವ ದೇವಸ್ಥಾನಗಳ ಅಭಿವೃದ್ಧಿಯ ರೂವಾರಿ, ಸರಳತೆಯ ಶಿಖರ ಡಾ| ಕನ್ಯಾನ ಸದಾಶಿವ ಶೆಟ್ಟಿಯವರು ಆಗಮಿಸಿ, ಇಂತಹ ಪುಣ್ಯ ದೈವಿಕ ಕಾರ್ಯದಲ್ಲಿ ಭಾಗಿಯಾಗುವ ಯೋಗ ಭಾಗ್ಯ ನನ್ನದಾಯಿತು. ಈ ಕ್ಷೇತ್ರದ ಅಭಿವೃದ್ದಿಯ ಜೊತೆ ಸದಾ ನಾನಿರುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದು, ಬಳಿಕ ಸಭಾ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ್ರು. ಇದೇ ವೇಳೆ ಎಂಆರ್ಜಿ ಗ್ರೂಪ್ ಇದರ ಎಂಡಿ ಡಾ| ಕೆ ಪ್ರಕಾಶ್ ಶೆಟ್ಟಿ ಅವರು ಸಮಾರಂಭಕ್ಕೆ ಶುಭಹಾರೈಸಿದ್ರು. ಇನ್ನು ಈ ಸಮಾರೋಪ ಸಮಾರಂಭದಲ್ಲಿ ಶಾಸಕರು, ಮಾಜಿ ಶಾಸಕರು, ಉದ್ಯಮಿಗಳು, ಸ್ವಾಮೀಜಿಯವರು ಸೇರಿದಂತೆ ಕ್ಷೇತ್ರದ ಪದಾಧಿಕಾರಿಗಳು ಉಪಸ್ಥಿತರಿದ್ರು.



