ಜನ ಮನದ ನಾಡಿ ಮಿಡಿತ

Advertisement

ಕಾಸರಗೋಡು: ಕಾಟುಕುಕ್ಕೆ ಕ್ಷೇತ್ರದಲ್ಲಿ ಕುದುಕ್ಕೊಳಿ ಹವ್ವಾ ಹಸನ್ ಪೌಂಡೇಶನ್ ನ “ಪ್ರಕೃತಿಯೊಂದಿಗೆ ಮೈತ್ರಿ” ಅಭಿಯಾನ

ಪೆರ್ಲ: ಕುದುಕ್ಕೊಳಿ ಹವ್ವಾ ಹಸನ್ ಪೌಂಡೇಶನ್ ವತಿಯಿಂದ ನಡೆಸುತ್ತಿರುವ “ಪ್ರಕೃತಿಯೊಂದಿಗೆ ಮೈತ್ರಿ” ಅಭಿಯಾನದಂತೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಜಮೀನಿನಲ್ಲಿ ಉಚಿತವಾಗಿದೇಸೀ ಹಣ್ಣುಗಳ ಗಿಡಗಳನ್ನು ನೆಡಲಾಯಿತು.

ಹವ್ವಾ ಹಸನ್ ಪೌಂಡೇಶನ್ ನ ಸ್ಥಾಪಕ, ಅಬುದಾಬಿ ಇಂಡಿಯನ್ ಶಾಲೆಯ ಕಾರ್ಯದರ್ಶಿ, ಸಾಮಾಜಿಕ ಮುಂದಾಳು ಅಬ್ದುಲ್ ಮದುಮೂಲೆ ಗಿಡ ನೆಡುವ ಮೂಲಕ ಸಾಮಾಜಿಕ ಕಳಕಳಿಗೆ ಹೊಸ ಭಾಷ್ಯ ಬರೆದರು. ಭೂಮಿಯ ತಾಪಮಾನ ಹಾಗೂ ಮನುಷ್ಯನ ಬದುಕಿಗೆ ಹಸಿರು ವಾತವರಣ ಉಸಿರಾಗಬೇಕಿದ್ದು ಜಾತಿ ಮತ ಧರ್ಮ ಬೇಧ ಭಾವ ತೊರೆದು ಎಲ್ಲರೂ ಇದರ ಸಂರಕ್ಷಣೆ ಹಾಗೂ ಉಳಿವಿಕೆಗೆ ಪ್ರಯತ್ನ ಪಟ್ಟಲ್ಲಿ ಮುಂದಿನ ತಲೆಮಾರಿಗೆ ಇದೊಂದು ಉದಾತ್ತ ಕೊಡುಗೆಯಾಗಬಲ್ಲುದು ಎಂದು ಅವರು ಅಭಿಪ್ರಾಯಪಟ್ಟರು.

ಶ್ರೀ ಸುಬ್ರಾಯ ದೇವಸ್ಥಾನ ಆಡಳಿತ ಮೊಕ್ತೇಸರ ಪಡ್ಡಂಬೈಲು ಗುತ್ತುತಾರನಾಥ ರೈ ಕಾಟುಕುಕ್ಕೆ, ಕ್ಷೇತ್ರ ಆಡಳಿತ ಸಮಿತಿ ಟ್ರಸ್ಟಿ ರಿತೇಶ್ ಕಿರಣ್, ಸುಧಾಕರ ಕಲ್ಲಗದ್ದೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪ*ಘಾತದಲ್ಲಿ ಯುವಕ ಸಾ*ವು….!

ಬಂಟ್ವಾಳ: ಅಮ್ಮುಂಜೆ ವೃದ್ಧೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ…!

ನವದೆಹಲಿ: ಚಿನ್ನದ ಬೆಲೆ ಇಳಿಯುತ್ತಾ? ವಿಶ್ವ ಚಿನ್ನ ಮಂಡಳಿಯ ಭವಿಷ್ಯ…!

error: Content is protected !!