ಜನ ಮನದ ನಾಡಿ ಮಿಡಿತ

Advertisement

14 ತಿಂಗಳ ಮಗುವಿನ ಕಿಡ್ನಿ 58 ವರ್ಷದ ಮಹಿಳೆಗೆ ಕಸಿ; ಹೈದರಾಬಾದ್ ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ, ಪ್ರಶಂಸೆ.

ಹೈದರಬಾದ್ : ಮೃತಪಟ್ಟ ಮೇಲೆ ದೇಹವನ್ನು ವ್ಯರ್ಥವಾಗಿ ಮಣ್ಣು ಮಾಡುವುದಕ್ಕಿಂತ ಅಂಗಾಂಗ ದಾನ ಮಾಡಿದರೆ ಇನ್ನೊಂದು ಜೀವವಾದರೂ ಬದುಕುಳಿಯುವಂತೆ ಮಾಡಬಹುದು. ಅಂಥದ್ದೇ ದಿಟ್ಟ ನಿರ್ಧಾರ ಕೈಗೊಂಡಿದೆ 14 ತಿಂಗಳ ಪುಟ್ಟ ಕೂಸಿನ ಕುಟುಂಬ. ಮೆದುಳು ನಿಷ್ಕ್ರಿಯಗೊಂಡಿದ್ದ ಮಗುವಿನ ಮೂತ್ರಪಿಂಡವನ್ನು 58 ವರ್ಷದ ಮಹಿಳೆಗೆ ದಾನ ಮಾಡಲಾಗಿದೆ. ಹೈದರಾಬಾದ್ನ ಕಿಮ್ಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಕಸಿ ಮಾಡಿದ್ದಾರೆ.ಕಳೆದ 7 ವರ್ಷಗಳಿಂದ ಮಹಿಳೆ ಮೂತ್ರಪಿಂಡ ಸಮಸ್ಯೆಯಿಂದಾಗಿ ಡಯಾಲಿಸಿಸ್‌ಗೆ ಒಳಗಾಗಿದ್ದರು. ಇದೇ ವೇಳೆ 14 ತಿಂಗಳ ಕೂಸಿನ ಮೆದುಳು ನಿಷ್ಕ್ರಿಯಗೊಂಡಿತ್ತು. ವೈದ್ಯರು ಮಗು ಬದುಕಲು ಸಾಧ್ಯವಿಲ್ಲ ಎಂದು ತಿಳಿಸಿದಾಗ, ಅಂಗಾಂಗ ದಾನಕ್ಕೆ ಮುಂದಾದರು. ಅದರಂತೆ ಮೂತ್ರಪಿಂಡವನ್ನು ಅಗತ್ಯವಿರುವ ಮಹಿಳೆಗೆ ದಾನ ಮಾಡಲು ನಿರ್ಧರಿಸಿದ್ದಾರೆ. ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಅಲ್ಲಿನ ವೈದ್ಯರು ನಡೆಸಿದ್ದಾರೆ. ಚಿಕ್ಕ ಮಕ್ಕಳ ಅಂಗಗಳು ತುಲನಾತ್ಮಕವಾಗಿ ಚಿಕ್ಕದಾಗಿರುವುದರಿಂದ ವಯಸ್ಸಾದ ಜನರಲ್ಲಿ ಅಳವಡಿಸುವಲ್ಲಿ ಹಲವು ತೊಡಕುಗಳು ಉಂಟಾಗುತ್ತವೆ. ಇದೆಲ್ಲವನ್ನೂ ಮೀರಿ ನುರಿತ ವೈದ್ಯರು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳ ನೆರವಿನಿಂದ ಈ ಸಾಧನೆ ಮಾಡಿದ್ದಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಮನೆಯಲ್ಲಿ ಒಂಟಿಯಾಗಿದ್ದ 82 ವರ್ಷದ ವೃದ್ಧೆಯ ಚಿನ್ನದ ಬಳೆ ದೋಚಿ ಪರಾರಿ..!

ಮಂಗಳೂರು: ಆಗಸ್ಟ್ 19ರಂದು ‘ಕನಸ ಯುವರಾಣಿ’ ಮ್ಯೂಸಿಕಲ್ ವಿಡಿಯೋ ಸಾಂಗ್ ಬಿಡುಗಡೆ

ಮಂಗಳೂರು: ಮಂಗಳೂರಿನ ಕೆಎಫ್‌ಸಿಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ಹಳೆಯ ಮಾಂಸ, ಅವಧಿ ಮೀರಿದ ಎಣ್ಣೆ ಪತ್ತೆ

ಬಂಟ್ವಾಳ: ಹಾಸನ-ಮಂಗಳೂರು ಮಾರ್ಗದಲ್ಲಿ ಮಾದಕವಸ್ತು ಸಾಗಾಟ; ಓರ್ವ ಬಂಧನ

ಸೂರಿಕುಮೇರು: ಕಾರು-ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಗಂಭೀರ…!

ಬಂಟ್ವಾಳ: ಕನಪಾದೆ ಶ್ರೀ ಸತ್ಯದೇವತಾ ದೈವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ…!

ಕಲ್ಲಡ್ಕ: ಅಲ್ ಬಿರ್ರ್ ಶಾಲೆಗೆ ವಾಹನ, ಸಾರ್ವಜನಿಕ ಸೇವೆಗೆ ಅಂಬುಲೆನ್ಸ್ ಕೊಡುಗೆ…!

ಮಂಗಳೂರು: ಕಪ್ಪೆಟ್ಟುವಿನಲ್ಲಿ ಅಂಬೇಡ್ಕರ್ ಕಲಾಕೃತಿ, ಪುರಾತನ ಸಂಸತ್ ಭವನದ ಮಾದರಿ

ಉಡುಪಿ: ಉಡುಪಿಯಲ್ಲಿ ಆ.15ರಂದು ‘ಆಟಿಡೊಂಜಿ ವಿಪ್ರಕೂಟ’ ಸಾಂಸ್ಕೃತಿಕ ಹಬ್ಬ..!

error: Content is protected !!